ಮಾನವರು ಸಾವು ತಪ್ಪುಗಳಿಗೆ ಪಚ್ಚಾತಪ ಪಟ್ಟರೆ ದೇವರ ಕ್ಷಮೆ ಪಡೆಯಬಹುದೆಂದು ತಿಳಿಸಿದರು

  • ಸುಖ ದುಃಖಗಳೆರಡನ್ನೂ ಅರಿಯದವ ಜ್ಞಾನಿಯಲ್ಲ
  • ಎಣ್ಣೆ ಬೇರೆ,ಬತ್ತಿ ಬೇರೆ ಎರಡೂ ಕೂಡಿ ಸೊರಡಾಯಿತು.ಪುಣ್ಯ ಬೇರೆ, ಪಾಪ ಬೇರೆ ಎರಡೂ ಕೂಡಿ ಒಡಲಾಯಿತು.
  • ಅಜ್ಞಾನಿಯಾದವಂಗೆ ಅರಿವು ತಾನೆಲ್ಲಿಯದೋ? ಸುಜ್ಞಾನಿಯಾದವಂಗೆ ಮರುಹು ತಾನೆಲ್ಲಿಯದೋ?
  • ಅಮೃತಸಾಗರದೊಳಿದ್ದು ಆಕಳ ಚಿಂತೆಯೇಕೆ?
  • ಕಾಡುಗಿಚ್ಚಿದರೆ ಅಡವಿಯೇ ಗುರಿ,ನೀರುಗಿಚ್ಚಿದರೆ ಸಮುದ್ರವೇ ಗುರಿ,ಒಡಲು ಗಿಚ್ಚಿದರೆ ಆ ತನುವೇ ಗುರಿ.
  • ಸತ್ಯವಿಲ್ಲದವರೊಡನೆ ಸಹಸ್ರಕ್ಕೊಮ್ಮೆ ನುಡಿಯಲಾಗದು,ಲಕ್ಷಕ್ಕೊಮ್ಮೆ ನುಡಿಯಲಾಗದು, ಕೋಟಿಗೊಮ್ಮೆ ನುಡಿಯಲಾಗದು.
"https://kn.wikiquote.org/w/index.php?title=ಅಲ್ಲಮ&oldid=8587" ಇಂದ ಪಡೆಯಲ್ಪಟ್ಟಿದೆ