ಬೀchi (ಬೀಚಿ,Rayasam Bheemasena Rao) (ಏಪ್ರಿಲ್ ೨೩, ೧೯೧೩ - ಡಿಸೆಂಬರ್ ೭, ೧೯೮೦) ಅಂದರೆ ವೈಶಿಷ್ಟ್ಯಪೂರ್ಣ ಹಾಸ್ಯ ಬರಹಗಳಿಗೆ ಮತ್ತೊಂದು ಹೆಸರು.

  • ಮನೆ ನಿಂತಿರುವುದು ಮಡದಿಯಿಂದ, ಅದು ಬಿದ್ದರೆ ಗಂಡನ ತಲೆ ಮೇಲೆ! ಬೀಚಿ
  • ಜೀವನವು ಬಸ್ಸಿನ ಪ್ರಯಾಣವಿದ್ದಂತೆ, ಒಡುವಾಗ ಗಾಳಿ ಬಹಳ, ನಿಂತಾಗ ವಿಪರೀತ ಸೆಕೆ..
  • ದುಡಿಯದೇ ಇರುವ ಪ್ರತಿಯೊಬ್ಬ ಶ್ರೀಮಂತನು ಭಿಕ್ಷುಕನೆ..
  • ಶ್ರೀಮಂತಿಕೆಯ ಗುಟ್ಟು ಗಳಿಸು ಎಂಬುದಲ್ಲ, ಉಳಿಸು ಎಂಬುದು.
  • ಸಾಹಿತ್ಯವು ಶ್ರೀಮಂತರಿಗೆ ಕಥೆಯನ್ನು ಕೊಡುತ್ತದೆ, ಬಡತನವು ಸಾಹಿತ್ಯಕ್ಕೆ ಕಥೆಯನ್ನು ಕೊಡುತ್ತದೆ.
  • ಶ್ರೀಮಂತನ ಕ್ಷಯವೇ, ಡಾಕ್ಟರನ ಅಕ್ಷಯ ಪಾತ್ರೆ.
  • ಗೆಳೆಯನನ್ನು ಉಪ್ಪಿನಂತೆ ಬಳಸಿಕೊಳ‍್ಳಬೇಕು, ಸಕ್ಕರೆಯಂತೆ ಸುರುವಿಕೊಳ್ಳಬಾರದು.
  • ಕೆಲವೇ ಜಾಣರ ಲಾಭಕ್ಕಾಗಿ, ಹಲವಾರು ಮೂರ್ಖರು ಕಟ್ಟುವ ಗುಂಪು.
  • ಎಮ್ಮೆಗು MLAಗೂ ಎನು ವ್ಯತ್ಯಾಸ?? ಎಮ್ಮೆ ತಿರುಗಾಡಿ ಮೇಯುತ್ತದೆ. MLA ಕುಳೆತಲ್ಲೇ ಮೇಯುತ್ತಾನೆ...
  • ಮಾಡಬಹುದಾದಾಗ ಮಾಡದಿದ್ದರೆ, ಮಾಡಲೇಬೇಕಾದಾಗ ಮಾಡಲಾಗುವುದಿಲ್ಲ.
  • ಮೂಕನ ಮಾತೃಭಾಷೆಯೇ ಮೌನ.
  • ತಾಳಿ ಕದ್ದವನಿಗೆ ಕಠಿಣ ಶಿಕ್ಷೆ, ಕಟ್ಟಿದವನಿಗೆ ಜೀವಾವಧಿ ಶಿಕ್ಷೆ.
  • ಹೆಣ್ಣು ಚಿನ್ನವನ್ನು, ರಾಜಕಾರಣಿ ಅಧಿಕಾರವನ್ನು, ಒಲ್ಲೆ ಎಂದ ದಿನವೇ ಪ್ರಳಯವಾಗುತ್ತದೆ...
  • ಹಲವರು ಹೆಚ್ಚು ಕಷ್ಟಪಟ್ಟು ಉಣ್ಣುತ್ತಾರೆ, ಕೆಲವರು ಹೆಚ್ಚು ಉಂಡು ಕಷ್ಟ ಪಡುತ್ತಾರೆ.
  • ಕೆಲಸವಿಲ್ಲದೆ ಸುಮ್ಮನೆ ಕುಳಿತವನ ಭುಜದ ಮೇಲೆ ಶನಿಯು ಬಂದು ಕೂಡುತ್ತಾನೆ.
  • ರಜೆಯ ಮೇಲೆ ಬಂದಾಗ, ಕಳ್ಳರು ತಂಗುವ ಗೌರ್ಮೆಂಟ್ ಗೆಸ್ಟ್ ಹೌಸ್-ಜೈಲು.
  • ಗಡ್ಡ ದೊಡ್ಡತನದ ಗುರುತಾಗಿದ್ದರೆ, ಮೇಕೆಯೇ ಮುಖ್ಯಮಂತ್ರಿಯಾಗಬೇಕಿತ್ತು...
  • ಗಂಡನ ಮುಖ, ಹೆಂಡತಿಯ ಮನಸ್ಸಿನ ಕನ್ನಡಿ.
  • ಪ್ರತಿಯೊಬ್ಬ ಜಾಣನಿಗೂ ಅಹಂಕಾರವಿದ್ದೇ ಇರುತ್ತದೆ, ತಾನೊಬ್ಬ ಕೋಣನೆಂದು ತಿಳಿಯುವವರೆಗೂ...
  • ಜಾಣರು ಗುದ್ದಾಡಿದರೆ ಚರ್ಚೆ ಆಗುತ್ತದೆ, ದಡ್ಡರು ಚರ್ಚೆ ಮಾಡಿದರೆ ಗುದ್ದಾಟ ಆಗುತ್ತದೆ...
  • ಎಲ್ಲಾ ಹುಚ್ಚರದು, ಒಂದೇ ವಾದ ನಾನು ಹುಚ್ಚನಲ್ಲಾ..
  • ಸಾರಾಯಿ ನಿಷೇಧ, ಕುಡಿದವರಿಗೆ ಮಾತ್ರ..
  • ಮೂರ್ಖರ ಜಗತ್ತಿನಲ್ಲಿ ಜಾಣನೇ ಹುಚ್ಚ.
  • ಹಸಿದ ಹೊಟ್ಟೆಗೆ, ಉಕ್ಕುವ ಪ್ರಾಯಕ್ಕೆ, ಇರುವಷ್ಟು ಕಿವುಡು ಯಾವ ಕಲ್ಲಿಗೂ ಇಲ್ಲ.
  • ತಾನು ಮರೆತುದನ್ನು ಇತರರಿಗೆ ಕಲಿಸುವವನೇ ಮಾಸ್ತರ..
  • ವಿವೇಕಿಯ ನಾಲಿಗೆ ಹೃದಯದಲ್ಲಿದೆ, ಅವಿವೇಕಿಯ ಹೃದಯವು ನಾಲಿಗೆಯಲ್ಲಿದೆ.
  • ದೇವನೆಂಬ ಧಣಿಗೆ, ಮನುಷ್ಯನು ಕೊಡಬೇಕಾದ ಬಾಕಿ-ಕರ್ತವ್ಯ.
  • ಸತ್ಯವನು ಅರಿತವನು, ಸತ್ತಂತೆ ಇರಬೇಕು...
  • ಮದುವೆ ಹೇಗಾಯಿತು ಎಂಬುದಕ್ಕಿಂತ, ಮದುವೆ ಆದವರು ಹೇಗೆ ಬಾಳುವರು ಎಂಬುದು ಮುಖ್ಯ..
  • ಹಸಿವು ಚೆನ್ನಾಗಿದ್ದರೆ, ಊಟ ಚೆನ್ನಾಗಿಯೇ ಇರುತ್ತದೆ.
  • ವಾರದಲ್ಲಿ ಮೂರು ದಿನವಾದರೂ ನಗುತ್ತಾ ಇರಬೇಕು, ನಿನ್ನೆ, ಇವತ್ತು ಮತ್ತು ನಾಳೆ.
  • ಮನೆಯಾಕೆ ಸೃಷ್ಟಿಸುವ ವಾತಾವರಣವೇ.. ಮನೆಯ ವಾತಾವರಣ.
  • ಮಾತುಗಳನ್ನು ಎಣಿಸಿ ನೋಡಬಾರದು, ತೂಕ ಮಾಡಿ ನೋಡಬೇಕು...
  • ಡಾಕ್ಟರರ ಸುತ್ತ ರೋಗಿಗಳೇ ಇರುವಂತೆ, ಒಳ್ಳೆಯವರ ಸುತ್ತ ಕೆಟ್ಟವರೇ ಇರುತ್ತಾರೆ.
  • ಸಾವಿಗೆ ತಾರತಮ್ಯವಿಲ್ಲ.
  • ಬದುಕಿರುವಾಗ ತಂದೆ ತಾಯಿಗೆ ನೀರು ಕೊಡದವನು, ಸತ್ತ ಮೇಲೆ ಧಾರಾಳವಾಗಿ ಬೆಂಕಿ ಕೊಡುತ್ತಾನೆ..
  • ಹೆಂಡತಿಯ ಸೌಂದರ್ಯ ಗಂಡನಿಗೆ ಕಾಣುವುದಿಲ್ಲ, ಗಂಡನ ಒಳ್ಳೆಯ ಗುಣ ಹೆಂಡತಿಗೆ ಕಾಣುವುದಿಲ್ಲ.
  • ಅಹಂಕಾರ ಅವಿವೇಕಿಗಳ ಆಸ್ತಿ...
  • ಜೀವನದಲ್ಲಿ ಆಶಾಭಂಗವನ್ನು ತಪ್ಪಿಸಬೇಕಾದರೆ, ಇರುವ ಒಂದೇ ಉಪಾಯ ಯಾವುದನ್ನೂ ಆಶಿಸಲೇಬಾರದು...
  • ಹೊಟ್ಟೆಯ ಹಸಿವು ಬಾಳಿನ ಯಾವ ದುಃಖಕ್ಕೂ ಸೊಪ್ಪು ಹಾಕುವುದಿಲ್ಲ.
  • ತಿಳಿಯಬೇಕಾದ್ದು ಸಮುದ್ರದಷ್ಟು, ತಿಳಿದಿರುವುದು ಹನಿಯಷ್ಟು.
  • ಜೀವನೋಪಾಯಕ್ಕಾಗಿ ಅಲ್ಲ, ಆತ್ಮ ಸಂತೋಷಕ್ಕಾಗಿ ಮಾಡುವ ಕೆಲಸಗಳೇ ಹವ್ಯಾಸ...
  • ಮಾವನ ಮನೆ ಸೇರೋ ಗಂಡ, ಗಂಡನ ಮನೆಗೆ ಬಾರದ ಹೆಣ್ಣು, ಇಬ್ಬರೂ ಭೂಮಿಗೆ ಭಾರ...
  • ಚಿಕ್ಕ ಮಗು ಮಾತು ಮಾತಿಗೆ ಕೇಳುವ ಏಕೆಯಲ್ಲಿಯೆ ಎಲ್ಲ ತತ್ವಜ್ಞಾನದ ತತ್ವವು ಅಡಕವಾಗಿದೆ.
  • ಬಳಸಿದಂತೆಲ್ಲಾ ಬೆಳೆಯುವ ಅಕ್ಷಯ ಪಾತ್ರೆ ನಗು.
  • ಮಗುವಿಗೆ ಅಳು, ಹೆಣ್ಣಿಗೆ ನಗು, ಅವಿವೇಕಿಗೆ ಧೈರ್ಯ, ಅಪ್ರಮಾಣಿಕನಿಗೆ ರಾಜಕಾರಣ-ಅತ್ಯುತ್ತಮ ಆಯುಧಗಳು.
  • ಒಂದು ಕೆಟ್ಟ ಮನಸ್ಸಿಗಿಂತಲೂ, ನೂರು ಕೆಟ್ಟ ಮುಖಗಳು ಮೇಲು...
  • ಜೀವನವನ್ನು ಇದ್ದಂತೆ ನೋಡುವವನಲ್ಲ, ತನಗೆ ಬೇಕಾದಂತೆ ನೋಡುವವನು-ಕಲಾವಿದ.
  • ತಾಯಿಯ ಪಾದದಡಿ ಇರುವ ದಿವ್ಯ ಲೋಕವೇ ಸ್ವರ್ಗ...
  • ಮುಖ ತೊಳೆಯಲು ಮಳೆಯ ನೀರು ಸಾಕು, ಮನಸ್ಸು ತೊಳೆಯಲು ಕಣ್ಣೀರೇ ಬೇಕು.
  • ಮತಗಳನ್ನಾಗಲಿ, ಮಗಳನ್ನಾಗಲಿ ಅಯೋಗ್ಯರಿಗೆ ಕೊಡಬಾರದು.
  • ಬಡವನ ಏಕಮಾತ್ರ ಸಂಪತ್ತು ಬುದ್ಧಿ.
  • ಕೀರ್ತಿ-ಇದನ್ನು ಗಳಿಸಲು ಮೊದಲು ಕಷ್ಟ, ನಂತರ ಉಳಿಸಲು ಕಷ್ಟ, ಕಳೆದುಕೊಂಡರಂತೂ ಕಡೆಯವರೆಗೂ ಕಷ್ಟ...
  • ಮನುಷ್ಯನನ್ನು ದುಡಿಯಲು ಹಚ್ಚುವ ಏಕಮಾತ್ರ ದೇವರು ಸ್ವಾರ್ಥ...
  • ಬರೆಯುವಾಗ ಅಲ್ಪವಿರಾಮ, ಪೂರ್ಣವಿರಾಮವನ್ನು ಬಿಡಬಾರದು. ಅವು ಮೂತ್ತೈದೆಗೆ ಅರಿಶಿಣ ಕುಂಕುಮ ಇದ್ದಂತೆ...
  • ಮುಂದಿನ ಪೀಳಿಗೆಗೆ ಸಾಹಿತಿ ಕೊಟ್ಟು ಸಾಯುವ ಆಸ್ತಿಯೇ ಪುಸ್ತಕ...
  • ನೀವು ಓದಿ ಇಂಜಿನಿಯರ್ ಆಗಿ ಡಾಕ್ಟರ್ ಆಗಿ ಅಥವಾ ಯಾವ ಕೆಲ್ಸಾನು ಸಿಗ್ಲಿಲ್ಲ ಅಂದ್ರೆ ಕೊನೆಗೆ ಟೀಚರ್ ಆಗಿ, ದಯವಿಟ್ಟು ರಾಜಕಾರಣಿ ಮಾತ್ರ ಆಗಬೇಡಿ. ಯಾಕಂದ್ರೆ ರಾಜಕೀಯವು ಕೆಟ್ಟ ಕಿಡಿಗೇಡಿಗಳ ಕೊನೆಯ ಉಪಾಯವಾಗಿದೆ.
  • ಮಿತ್ರ ಸಂಸ್ಕೃತ ಭಾಷೆಯಲ್ಲಿ ಸಾಲವನ್ನು ಕೇಳುವ ಗೆಳೆಯ...
  • ನಮಗೆ ಬೇಕಾದಾಗಲೆಲ್ಲಾ ದೇವರು ಪ್ರತ್ಯಕ್ಷವಾಗುವುದಿಲ್ಲ, ದಿಢೀರೆಂದು ದೇವರು ಪ್ರತ್ಯಕ್ಷವಾಗುವುದು ಕೇವಲ ತಮಿಳು ಸಿನೆಮಾಗಳಲ್ಲಿ ಮಾತ್ರ!
  • ಪ್ರತಿಯೊಬ್ಬ ಗಂಡಸಿಗೂ ಮನೆ ಮತ್ತು ಹೆಂಡತಿ ಇರಲೇಬೇಕು.. (ಸ್ವಂತವಾದಷ್ಟು ಒಳ್ಳೆಯದು)
  • ಸಾವಿನ ಬಗ್ಗೆ ಎಚ್ಚರಿಸಲು ಕಾಲರಾಯನು ವರ್ಷಕೊಮ್ಮೆ ಗಂಟೆ ಬಾರಿಸುವ ದಿನವೇ ಜನ್ಮದಿನ.
  • ಬಾಳಿನ ವ್ಯಾಕರಣ: ಹೆಣ್ಣು-ಪದ್ಯ, ಗಂಡು-ಗದ್ಯ, ಮಕ್ಕಳು-ರಗಳೆ.
  • ಮನೆ ನಿಂತಿರುವುದು ಮಡದಿಯಿಂದ, ಅದು ಬಿದ್ದರೆ ಗಂಡನ ತಲೆಯ ಮೇಲೆ...
  • ಕಣ್ಣೀರು ಸುರಿಸುವುದೊಂದೇ ಹೆಣ್ಣಿನ ಕೆಲಸವಾಗಿದ್ದರೆ ಎಲ್ಲ ಹೆಣ್ಣುಗಳು ಅದನ್ನೇ ಸಮರ್ಥವಾಗಿ ಮಾಡಿ, ಲೋಕದ ಎಲ್ಲ ಗಂಡುಗಳನ್ನು ಕಂಬನಿ ಮಹಾಸಾಗರದಲ್ಲಿ ಎಂದೋ ಮುಳುಗಿಸಿ ಬಿಡುತ್ತಿದ್ದವು...
  • ಜೀವನದ ದುರಂತವಿದು, ಎಂದೋ ಬಯಸಿದುದು ಇಂದು ಸಿಗುತ್ತದೆ, ಅದು ಅವನಿಗೆ ಬೇಡವಾಗಿ ಪರರಿಗೆ ಉಪಯೋಗವಾಗುವಾಗ. ಉದಾ: ಮುಪ್ಪಿನಲ್ಲಿ ಕಿರಿಯ ಹೆಂಡತಿ.
  • ಕನ್ನಡದಲ್ಲಿ ನಾಲ್ಕು ಬಗೆ-ಹೋದದ್ದು ಹಳೆಗನ್ನಡ, ಹೋಗುತ್ತಿರುವುದು ನಡುಗನ್ನಡ, ನಡೆಯುತ್ತಿರುವುದು ಬಡಕನ್ನಡ, ಬರಲಿರುವುದು ಎಬಡ ಕನ್ನಡ...
  • ಬಾಳಿನಲ್ಲಿ ಏನಿಲ್ಲ? ಕೊಲ್ಲಲು ವಿಷವಿದೆ, ಬದುಕಿಸಲು ಔಷಧಿಯೂ ಇದೆ, ಔಷಧದಲ್ಲೂ ವಿಷವಿದೆ. ಇದುವೇ ಜೀವನ...
"https://kn.wikiquote.org/w/index.php?title=ಬೀಚಿ_(ಬೀchi)&oldid=8769" ಇಂದ ಪಡೆಯಲ್ಪಟ್ಟಿದೆ