• ನಮ್ಮ ಜೀವನದ ಜವಾಬ್ದಾರಿ ನಮ್ಮ ಹೆಗಲ ಮೇಲೆಯೇ ಇರಬೇಕು. ಏಕೆಂದರೆ ಬೇರೆಯವರ ಹೆಗಲ ಮೇಲೆ ಬರೀ ನಮ್ಮ ಹೆಣ ಹೋಗುತ್ತದೆ.
  • ವ್ಯಕ್ತಿಗಳನ್ನು ಕೊಲ್ಲಬಹುದು ಆದರೆ ಅವರ ವಿಚಾರಗಳನ್ನಲ್ಲ.
  • ಭತ್ತದ ಬದಲು ಬಂದೂಕು ನೆಡಬೇಕು.
  • ಜನರ ಇಚ್ಛಾಶಕ್ತಿಯ ಅಭಿವ್ಯಕ್ತಿಯಾಗಿರುವವರೆಗೂ ಮಾತ್ರ ಕಾನೂನಿನ ಪಾವಿತ್ರ್ಯವನ್ನು ಕಾಪಾಡಿಕೊಳ್ಳಬಹುದು.
  • ದೇಶಸೇವೆಯೇ ನನ್ನ ಧರ್ಮವಾಗಿದೆ.
  • ಪ್ರೇಮಿಗಳು, ಹುಚ್ಚರು ಹಾಗೂ ಕವಿಗಳು ಒಂದೇ ವಸ್ತುವಿನಿಂದ ಮಾಡಲ್ಪಟ್ಟಿರುತ್ತಾರೆ.
  • ದೇಶಭಕ್ತರನ್ನು ಹೆಚ್ಚಾಗಿ ಹುಚ್ಚರೆನ್ನುತ್ತಾರೆ.
  • ಸೂರ್ಯ ವಿಶ್ವದ ಎಲ್ಲ ದೇಶಗಳನ್ನು ನೋಡುತ್ತಾನೆ. ಆದರೆ ಭಾರತದಂಥ ಸ್ವತಂತ್ರ, ಸುಶೀಲ, ಸುಂದರ, ಸಂತೋಷಕರ ದೇಶವನ್ನು ಸೂರ್ಯ ನೋಡಿರಲು ಸಾಧ್ಯವೇ ಇಲ್ಲ.
  • ಕ್ರಾಂತಿ ಮನುಕುಲದ ಅನಿವಾರ್ಯ ಅಧಿಕಾರವಾಗಿದೆ. ಸ್ವಾತಂತ್ರ್ಯ ಎಲ್ಲರ ಜನ್ಮಸಿದ್ಧ ಹಕ್ಕಾಗಿದೆ. ಶ್ರಮವೇ ಸಮಾಜದ ನಿಜವಾದ ನಿರ್ವಾಹಕವಾಗಿದೆ.
  • ನಿರ್ದಯ ವಿಶರ್ಮೆ ಹಾಗೂ ಸ್ವತಂತ್ರ ಚಿಂತನೆ ಕ್ರಾಂತಿಕಾರಿ ಯೋಚನೆಯ ಎರಡು ಮುಖ್ಯ ಲಕ್ಷಣಗಳಾಗಿವೆ.
  • ನಾನೊಬ್ಬ ಮನುಷ್ಯನಾಗಿರುವೆ, ಮನುಷತ್ವದ ಮೇಲೆ ಪ್ರಭಾವ ಬೀರುವ ಎಲ್ಲದರ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ.
  • ನನ್ನ ಪೆನ್ ನನ್ನ ಭಾವನೆಗಳೊಂದಿಗೆ ಚಿರಪರಿಚಿತವಾಗಿದೆ. ನಾನು ಪ್ರೇಮ ಬರೆಯಲು ಬಯಸಿದರೆ, ಅದು ಕ್ರಾಂತಿ ಎಂದು ಬರೆಯುತ್ತದೆ.
  • ಪ್ರಯತ್ನಿಸುವುದು ಮನುಷ್ಯನ ಕರ್ತವ್ಯವಾಗಿದೆ, ಯಶಸ್ಸು ಅವಕಾಶ ಹಾಗೂ ಪರಿಸರದ ಮೇಲೆ ನಿರ್ಧರಿತವಾಗುತ್ತದೆ.
  • ಪ್ರೀತಿ ಯಾವಾಗಲೂ ಮನುಷ್ಯನ ಪಾತ್ರವನ್ನು ಹೆಚ್ಚಿಸುತ್ತದೆ. ಪ್ರೀತಿ ಪ್ರೀತಿಯಾಗಿದ್ದರೆ ಅದು ಯಾವತ್ತೂ ಮನುಷ್ಯನನ್ನು ಕುಗ್ಗಿಸುವುದಿಲ್ಲ.
  • ಫಿಲಾಸಫಿ ಮಾನವ ದೌರ್ಬಲ್ಯದ ಅಥವಾ ಜ್ಞಾನದ ಕೊರತೆಯ ಫಲಿತಾಂಶವಾಗಿದೆ.
  • ಕ್ರಾಂತಿಯ ಖಡ್ಗವು ವಿಚಾರಗಳ ಘೋರ ಕಲ್ಲಿನ ಮೇಲೆ ಹರಿತಗೊಂಡಿದೆ.
  • ನನ್ನ ಕ್ರಾಂತಿಯು ಅನಿವಾರ್ಯವಾಗಿ ಕಲಹವನ್ನು ಒಳಗೊಂಡಿರಲಿಲ್ಲ. ಅದು ಬಾಂಬ್ ಮತ್ತು ಪಿಸ್ತೂಲಗಳ ಆರಾಧನೆಯಾಗಿರಲಿಲ್ಲ.
  • ರಾಜನ ವಿರುದ್ಧದ ದಂಗೆ ಯಾವಾಗಲೂ ಎಲ್ಲ ಧರ್ಮಗಳ ಅನುಸಾರ ಪಾಪವಾಗಿದೆ. ಅದಕ್ಕೆ ನಾನು ಆ ದೇವರ ಅಸ್ತಿತ್ವವನ್ನು ನಂಬುವುದಿಲ್ಲ.
  • ದಂಗೆ ಒಂದು ಕ್ರಾಂತಿಯಲ್ಲ. ಅದು ಕೊನೆಗೆ ಎಲ್ಲರ ಅಂತ್ಯಕ್ಕೆ ಕಾರಣವಾಗಬಹುದು.
  • ನಾನು ಸಂತೋಷದಿಂದ ಗಲ್ಲು ಹತ್ತುತ್ತೇನೆ ಮತ್ತು ಕ್ರಾಂತಿಕಾರಿಗಳು ಎಷ್ಟು ಧೈರ್ಯದಿಂದ ತಮ್ಮನ್ನು ತಾವು ತ್ಯಾಗ ಮಾಡಬಹುದೆಂದು ಜಗತ್ತಿಗೆ ತೋರಿಸುತ್ತೇನೆ.
  • ಇದು ಮದುವೆಯಾಗುವ ಸಮಯವಲ್ಲ. ನನ್ನ ದೇಶ ನನ್ನನ್ನು ಕರೆಯುತ್ತಿದೆ. ನನ್ನ ಹೃದಯ ಮತ್ತು ಆತ್ಮದಿಂದ ದೇಶಕ್ಕೆ ಸೇವೆ ಸಲ್ಲಿಸುವ ಪ್ರತಿಜ್ಞೆ ಮಾಡಿದ್ದೇನೆ.
  • ಕಿವುಡರಿಗೆ ಕೇಳಬೇಕೆಂದರೆ ಜೋರಾಗಿ ಕೂಗಿ ಹೇಳಬೇಕು.
  • ನನಗೂ ಆಸೆ,ಆಕಾಂಕ್ಷೆ ಹಾಗೂ ಜೀವನದ ಕಡೆಗೆ ಆಕರ್ಷಣೆಗಳಿವೆ.ಆದರೆ ಅವಶ್ಯಕತೆ ಬಿದ್ದರೆ ನಾನವುಗಳನ್ನು ತ್ಯಾಗ ಮಾಡಲು ಸಿಧ್ದನಾಗಿರುವೆ.ಇದೇ ನಿಜವಾದ ಬಲಿದಾನವಾಗಿದೆ...
  • ಸ್ವಂತ ಧೈರ್ಯದ ಮೇಲೆಯೇ ಜೀವಿಸಿ.ಇನ್ನೊಬ್ಬರ ಹೆಗಲು ನಿಮ್ಮ ಶವ ಯಾತ್ರೆಗೆ ಮಾತ್ರ ನೆರವಾಗುತ್ತದೆ.