1. ನಿಮ್ಮ ಮನಸ್ಸು ಪರಿಶುದ್ಧವಾಗಿದ್ದರೆ, ನಿಮ್ಮ ನಡೆತೆಯು ಶುದ್ಧವಾಗಿರುತ್ತದೆ.
  2. ಜ್ಞಾನದ ಅರಿವನ್ನು ಬಲ್ಲವನು ಜ್ಞಾನಿಯಲ್ಲ, ಜ್ಞಾನದ ಅಳವನ್ನು ಅರಿತವನೇ ನಿಜವಾದ ಜ್ಞಾನಿ.
  3. ವೈಫಲ್ಯವೇ ಯಶಸ್ಸಿನ ಕೀಲಿಯಾಗಿದೆ, ಪ್ರತಿಯೊಂದು ತಪ್ಪುಗಳು ನಮಗೆ ಏನನ್ನಾದರು ಕಲಿಸುತ್ತದೆ.
  4. "ಎಲ್ಲವನ್ನೂ ನಾನೇ ಮಾಡುವವನು" ಎಂಬ ಅಂಹಕಾರ ತೊರೆದು, "ನಾನು ನಿಮಿತ್ತ ಮಾತ್ರ" ಎಂಬುದನ್ನು ಅರಿತಾಗ ಮಾನವ ಪರಿಪೂರ್ಣನಾಗುತ್ತಾನೆ.
  5. ಯಾರು ತನ್ನನ್ನು ತಾನು ಅರಿತು ಪ್ರೀತಿಸುತ್ತಾನೋ, ಅವನು ಲೋಕವನ್ನು ಅರಿತು ಪ್ರೀತಿಸುತ್ತಾನೆ.
  6. ಬಯಿಸಿದ್ದೆಲ್ಲಾ ಸಿಗುವಂತಿದ್ದರೆ ಬಯಕೆಗೆ ಬೆಲೆ ಇರುತ್ತಿರಲಿಲ್ಲ, ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಗೊತ್ತಾಗುವುದಿಲ್ಲ.
  7. ನಿಮ್ಮ ಮುಖವು ನಿಮ್ಮ ನಡೆತೆಯನ್ನು ವಿವರಿಸಲು ಸಾಧ್ಯವಿಲ್ಲ. ಆದರೆ, ನಿಮ್ಮ ವರ್ತನೆಯು ನಿಮ್ಮ ನಡತೆಯನ್ನು ತಿಳಿಸುತ್ತದೆ.
  8. ಗೌರವನ್ನು ಗಳಿಸಬೇಕೆಂದಿದ್ದರೆ ಮೋದಲು ನೀನು ಎಲ್ಲರನ್ನೂ ಗೌರವಿಸು.
  9. ಕಷ್ಟ ಕಲಿಸುತ್ತದೆ, ಸುಖ ಮೆರೆಸುತ್ತದೆ, ಒಳ್ಳೆಯತನ ಮತ್ತು ಆತ್ಮವಿಶ್ವಾಸ ಮಾತ್ರ ಬಾನೆತ್ತರಕ್ಕೆ ಬೆಳೆಸುತ್ತದೆ.
  10. ಪ್ರತಿವರ್ಷ ಕ್ಯಾಲೆಂಡರ್ ಮಾತ್ರ ಬದಲಾಗುತ್ತದೆ. ಆದರೆ, ನಮ್ಮ ಬದಕು ಇದ್ದಲ್ಲೇ ಇರುತ್ತದೆ ಎಂಬ ಮಾತನ್ನ ಈ ವರ್ಷ ಸುಲ್ಮಾಗಿಸಿ.
  11. ಜೀವನ ಅಂದರೆ ಸಾಯುವವರೆಗು ಜೀವಿಸುವುದಲ್ಲ, ಅದೊಂದು ಅನುಭವಗಳ ಪಾಠಶಾಲೆ. ಆ ಅನುಭವ ಮತ್ತೊಬ್ಬರ ಜೀವನಕ್ಕೆ ನೆರವಾಗಲಿ.
  12. ವ್ಯಾಯಾಮ ಶರೀರವನ್ನು ಶುದ್ಧಿ ಮಾಡಿದರೆ, ಧ್ಯಾನ ಆಲೋಚನೆಯನ್ನು ಶುದ್ಧಿ ಮಾಡುತ್ತದೆ ಮತ್ತು ಪ್ರಾಣಯಾಮ ಪ್ರಾಣವನ್ನು ಶುದ್ಧಿ ಮಾಡುತ್ತದೆ.
  13. ಪ್ರತಿಯೊಂದರಲ್ಲೂ ಒಳ್ಳೆಯದನ್ನೇ ನೋಡಲು ಮೊದಲು ನಿಮ್ಮ ಮನಸ್ಸಿಗೆ ತರಬೇತಿ ನೀಡಿ.
  14. ಕಷ್ಟಗಳು ಎದುರಾದಾಗ ದೇವರಲ್ಲಿ ಹರಕೆ ಹೋರುವ ಬದಲು, ಆ ಕಷ್ಟಗಳನ್ನು ಎದರಿಸಲು ಶಕ್ತಿಕೊಡಲು ದೇವರಲ್ಲಿ ಪ್ರಾರ್ಥಿಸಿ.
  15. ಪ್ರತಿಯೊಂದು ಸಾಧನೆಯ ಹಿಂದೆ ಸೋಲಿನ ಅನುಭವವೇ ಹೆಚ್ಛಾಗಿ ಅಪ್ತವಾಗಿರುತ್ತದೆ.
  16. ನಾವು ಧಾರ್ಮಿಕ ನಂಬಿಕೆಗಳ ಜೊತೆಗೆ ಮನುಷ್ಯತ್ವ ಎಂಬ ಮೂಲ ಸತ್ಯವನ್ನು ಒಪ್ಪಿಕೊಂಡಾಗ ಮಾತ್ರ ನಮ್ಮ ನಂಬಿಕೆ ಪರಿಪೂರ್ಣವಾಗುವುದು.
  17. ತಮ್ಮ ಎಲ್ಲಾ ನಿಯಮಗಳನ್ನು ದಾಟಿ ನಿಯಮಾತೀತನಾಗುವುದೇ ಅವಧೂತ ಸ್ಥಿತಿ.
  18. ಯೋಗ್ಯತೆ ಮಾನವನ ಉಡುಗೆ ತೋಡುಗೆಯಲ್ಲ ನಿಜವಾಗಿಯೂ ಅವನ ವರ್ತನೆಯಲ್ಲಿ ನೆಲೆಸಿರುತ್ತದೆ.
  19. ಸದಾ ಸತ್ಕಾರವನ್ನು ಅಪೇಕ್ಷಿಸುವನು ಸನ್ಯಾಸಿ ಆಗಲು ಸಾಧ್ಯವಿಲ್ಲ.
  20. ಗೆಲ್ಲಬಲ್ಲೆ, ಧೈರ್ಯದಿಂದ ನಿಲ್ಲಬಲ್ಲೆ ಎಂದು ಸಧೃಡವಾಗಿ ನಿಲ್ಲುವುದೇ ನಿಜವಾದ ಗೆಲುವಿನ ಗುಣ.
  21. ನಿನಗೆ ನೀನು ಮಾಡುವ ಕೆಲಸಗಳು ಸರಿ ಎನಿಸಿದಾಗ ಯಾರ ಅಭಿಪ್ರಾಯಕ್ಕು ಕಾಯಬೇಡ.
  22. ಒಂದು ನಿರ್ದಿಷ್ಟ ಸನ್ನಿವೇಶವನ್ನು ನಿಭಾಯಿಸಲು ಅಸಾಧ್ಯವಾದಗ ಸಮಸ್ಯೆಯಾಗಿ ಗೋಚರಿಸುತ್ತದೆ.
  23. ಬಯಸಿದ್ದೆಲ್ಲಾ ಸಿಗುವಂತಿದ್ದರೆ ಬಯಕಗೆ ಬೆಲೆ ಇರುತ್ತಿರಲಿಲ್ಲ, ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಗೋತ್ತಾಗುವುದಿಲ್ಲ.