ಮಾಸ್ತಿ ವೆಂಕಟೇಶ ಅಯ್ಯಂಗಾರ್‌

ಲೇಖಕ, ಕವಿ ಮತ್ತು ಸಾಹಿತಿ
  • ಜೀವಂತವಾದ ಯಾವ ಭಾಷೆಯೂ ತಾನು ಕಡಿಮೆ ಯೋಗ್ಯತೆಯ ಭಾಷೆಯೆಂದು ಕುಗ್ಗಬಾರದು. - ೧೧:೫೫, ೨ ನವೆಂಬರ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಅನುಭವಕ್ಕಿಂತ ಹಿರಿದಾದ ಸತ್ಯ ಇಲ್ಲ
  • ಯಾವ ಕಲೆಯಲ್ಲೂ ರುಚಿಯೊಂದಿಗೆ ಶುಚಿಯನ್ನು ಕಾಪಾಡಿಕೊಳ್ಳುವುದು ಭಾರತೀಯ ಸಂಪ್ರದಾಯ - ೦೪:೧೮, ೩ ಜೂನ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು.
  • ಕೊರಬೇಡಿ , ನಿಲ್ಲಬೇಡಿ, ಇಳಿಯ ಬೇಡಿ , ಏರುತ್ತಾ ಇರಿ.[೧]
  • ಮಾತು ಮನಸುಗಳನ್ನು ಒಂದುಗೂಡಿಸಬೇಕೇ ಹೊರತು ಒಡೆಯಬಾರದು. ೧೮:೦೩, ೧೦ ಮೇ ೨೦೧೮ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಒಬ್ಬ ಮನುಷ್ಯ, ಆತನ ಸ್ನೇಹಿತರು ಹೊಗಳಿ ಹಾಡುವಷ್ಟು ಒಳ್ಳೆಯವನೂ ಇರುವುದಿಲ್ಲ, ಅವನಿಗಾಗದವರು ತೆಗಳಿ ತಿರಸ್ಕರಿಸುವಷ್ಟು ಕೆಟ್ಟವನೂ ಇರುವುದಿಲ್ಲ.
  • ಬೇರೊಬ್ಬರ ಶ್ರೇಯಸ್ಸನ್ನು ಎಷ್ಟು ಹೆಚ್ಚಾಗಿ ನೀನು ಬಯಸುತ್ತೀಯೋ ಅಷ್ಟರ ಮಟ್ಟಿಗೆ ನಿನ್ನ ಬಾಳು ಸಾರ್ಥಕವಾಗುತ್ತದೆ.
  • ಓದು ದೊಡ್ಡದು ಸರಿ. ಆದರೆ ಮನುಷ್ಯ ಓದಿ ಕಲಿಯೋದಕ್ಕಿಂತ ಹೆಚ್ಚು ಸಂಗತಿಗಳನ್ನು ತಾನೇ ಬದುಕಿ ಕಲಿಯುತ್ತಾನೆ. ಸುತ್ತಲ ಬದುಕನ್ನು ನೋಡಿ ಕಲಿಯುತ್ತಾನೆ.

ಉಲ್ಲೇಖನಗಳು ಸಂಪಾದಿಸಿ